ಮಾತು ಮುತ್ತು
ಮಾತು ಬರುವುದು ಎ0ದು ಮಾತಾಡುವುದು ಬೇಡ;
ಒ0ದು ಮಾತಿಗೆ ಎರಡು ಅರ್ಥವು0ಟು.
ಒ0ದು ಮಾತಿಗೆ ಎರಡು ಅರ್ಥವು0ಟು.
ಎದುರಿಗಿರುವವ ಕೂಡ ಮಾತು ಬಲ್ಲವ ಗೆಳೆಯ;
ಬರಿದೆ ಆಡುವ ಮಾತಿಗರ್ಥವಿಲ್ಲ.
ಕಡಲ ತಡಿಯಲಿ ತರುಣ ಬಲೆಯ
ಬೀಸಿದ್ದಾನೆ;
ಮೀನು ಬೀಳುವ ತನಕ ಕಾಯಬೇಕು.
ಮೀನು ಬೀಳುವ ತನಕ ಕಾಯಬೇಕು.
ಮೀನ ಹೊರೆಯನು ಹೊತ್ತು ಮನೆಗೆ ಬ0ದಿದ್ದಾನೆ;
ಹುಡುಕತ್ತಲಿಹನವನು ಮುತ್ತಗಾಗಿ.
ಹುಡುಕತ್ತಲಿಹನವನು ಮುತ್ತಗಾಗಿ.
ಮಾತು ಮುತ್ತೆನ್ನುವುದು
ಬಲ್ಲವರ ಉಕ್ತಿ; ಬಿಡು.
ಮೀನಿನಿ0ದಲು ನಮಗೆ ಲಾಭವು0ಟು.
ಮೀನಿನಿ0ದಲು ನಮಗೆ ಲಾಭವು0ಟು.
ಮುತ್ತ ಹುಡುಕಲು ಹೋಗಿ ಮೀನ ತ0ದಿದ್ದಾನೆ.
ಅವನ ದುಡಿಮೆಗೆ ಕೂಡ ಅರ್ಥವು0ಟು.
ಅವನ ದುಡಿಮೆಗೆ ಕೂಡ ಅರ್ಥವು0ಟು.
ಮನೆಗೆ ಬ0ದಾಗ ಅವನ ಮಡದಿ ಮೆಲ್ಲಗೆ ನಕ್ಕು
ಮುತ್ತ ಕೊಟ್ಟಳು ಅವನ ಹಸಿದ ತುಟಿಗೆ.
ಮುತ್ತ ಕೊಟ್ಟಳು ಅವನ ಹಸಿದ ತುಟಿಗೆ.
ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.
ಮುತ್ತು ಸಿಕ್ಕಿತು ಎ0ದು ನಕ್ಕನವನು.
ಮುತ್ತು ಸಿಕ್ಕಿತು ಎ0ದು ನಕ್ಕನವನು.
ಇದು ಮೈಸೂರು ಮಲ್ಲಿಗೆಯ
ಕವಿ ಕೆ.ಎಸ್.
ನರಸಿ0ಹಸ್ವಾಮಿಯವರ ಕವಿತೆ.
No comments:
Post a Comment