ಆತ್ಮೀಯರೇ,
ಈ ಬ್ಲಾಗು ಮತ್ತು ಇದರ ಉದ್ದೇಶ ಹಲವರಿಗೆ ತಲಪಿರುವದು ಆರಂಭದಲ್ಲಿ ಬಂದ ಶುಭ ಹಾರೈಕೆಗಳ ಮಿಂಚಂಚೆಗಳಿಂದ ಸಾಬೀತಾಗಿದೆ. ಕೆಲ ಸಹೃದಯರು ತಮ್ಮ ತಮ್ಮ ಕಛೇರಿಗಳಲ್ಲಿದ್ದ ಉದ್ಯೋಗ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಕೂಡ. ಮಾಹಿತಿ ವಿನಿಮಯ ಹಾಗೂ ಸಾಹಿತ್ಯದ ತುಣುಕುಗಳ ಪ್ರಕಟಣೆ ಉಮೇದಿನಿಂದಲೇ
ನಡೆಯಿತು.
ಕ್ರಮೇಣ ಇದ್ದ ಉಮೇದು ಕಡಿಮೆಯಾಗಿ ಈಗ ಇಲ್ಲವೇ ಇಲ್ಲವೆನ್ನುವಷ್ಟಾಗಿದೆ. ಐಟಿ ಕ್ಷೇತ್ರದಲ್ಲಿ ಪರಭಾಷಿಗರ ಪ್ರಾಬಲ್ಯ ಹೆಚ್ಚಾಗುತ್ತಿದೆ. ಕನ್ನಡಿಗರ ಕಡೆಗಣನೆ ಮುಂದುವರೆದಿದೆ. ಹೀಗಿದ್ದು ಶುರುವಿನಲ್ಲಾದ ವಿನಿಮಯ ಕಡಿಮೆಯಾಗಿದ್ದಕ್ಕೆ ಸಕಾರಣ ಗೊತ್ತಿಲ್ಲ. ಮತ್ತೆ ಕನ್ನಡಿಗರ ಅಭಿಮಾನದತ್ತ ಬೊಟ್ಟು ಮಾಡುವುದು ಎಷ್ಟರ ಮಟ್ಟಿಗೆ ಸರಿಯೋ? ಈತನಕ ಈ ಬ್ಲಾಗಿನಿಂದ ಒಬ್ಬನೇ ಒಬ್ಬ ಕನ್ನಡಿಗನಿಗಾದರೂ ನೆರವಾಗಿದ್ದರೆ ಅಷ್ಟೇ ಸಾಕು.
ಈ ಬ್ಲಾಗಿಗೆ ಸಹಕರಿಸಿ ಪ್ರೋತ್ಸಾಹಿಸಿದ ಹಿತೈಷಿಗಳಿಗೆ ವಂದನೆಗಳು.
ಇನ್ನು ಮುಂದೆ ಈ ಬ್ಲಾಗು ಚಲಾವಣೆಯಲ್ಲಿ ಇರುವುದಿಲ್ಲ ಎಂದು ಹೇಳಲು ಮನಸ್ಸು ಭಾರವಾಗುತ್ತಿದೆ. ಆದರೆ ಬೇರೆ ದಾರಿಯಿಲ್ಲ.
ಈ ಬ್ಲಾಗು ಯಾರು ಯಾವಾಗ ತೆರೆದು ನೋಡಿದರೂ ಈ ಹಂತದಲ್ಲಿಯೇ ಇರುತ್ತದೆ. ಇದರಿಂದ ಮತ್ತಾರಿಗಾದರೂ ಅಭಿಮಾನ ಜಾಗೃತವಾಗಬಹುದೆಂಬ ನಿರೀಕ್ಷೆಯೊಂದಿಗೆ....
ನಿಮ್ಮ ಉದ್ದೇಶ ಚೆನ್ನಾಗಿತ್ತು. ಆದರೆ ಈ ಬ್ಲಾಗ್ ಗೆ ಹೆಚ್ಚಿನ ಪ್ರಚಾರ ಮತ್ತು reader base ಇಲ್ಲದೇ ಇದ್ದುದರಿಂದ ಹೀಗಾಗಿದೆ. ಬೇಸರ ಬೇಡ. ಸಾಧ್ಯವಾದ ಕಡೆ ಸಾಧ್ಯವಾದ ರೀತಿಯಲ್ಲಿ ಇದು ಮುಂದುವರೆಯಲಿ..
ReplyDelete