ಬೆ೦ಗಳೂರಿಗಿರುವ ಭಾರತದ ‘ಸಿಲಿಕಾನ್ ವ್ಯಾಲಿ’ ಎ೦ಬ ಹೆಸರು ಮತ್ತು ನಾಡಿನ ಪ್ರಾದೇಶಿಕ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆಯನ್ನು ಸ್ಫೂರ್ತಿಯಾಗಿಟ್ಟುಕೊ೦ಡು ಶುರು ಮಾಡಿರುವ ಬ್ಲಾಗ್ ಇದು. ನಮ್ಮ ನಮ್ಮ ಪರಿಚಿತ ವಲಯಗಳಲ್ಲಿಯೇ ದೊರಕುವ IT ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಮಾಹಿತಿಯನ್ನು ಹ೦ಚಿಕೊಳ್ಳುವುದು ಈ ಪ್ರಯತ್ನದ ಪ್ರಮುಖ ಉದ್ದೇಶ. ಈ ಮೂಲಕ ಕನ್ನಡದ ಜಾಣ ಜಾಣೆಯರಿಗೆ ನೆರವಾಗುವ ಸದಾಶಯವು ನಮ್ಮದು. ಯಾರು ಬೇಕಾದರೂ ತಮಗೆ ತಿಳಿದ IT ಕ್ಷೇತ್ರದ ಉದ್ಯೋಗ ಮಾಹಿತಿಯನ್ನು itkelasa@gmail.com ವಿಳಾಸಕ್ಕೆಬರೆದು ಕಳುಹಿಸಬಹುದು.

ಅ೦ತೆಯೆ, ಈ ಬ್ಲಾಗಿನಲ್ಲಿ ಆಗಾಗ ಕನ್ನಡ ಸಾಹಿತ್ಯದ ತುಣುಕುಗಳನ್ನು ಪ್ರಕಟಿಸಲಾಗುವುದು. ನಮ್ಮ ಹಿರಿಯ ವಿದ್ವಾಂಸರಿಂದ ಹಿಡಿದು ಸಮಕಾಲೀನರವರೆಗೆ, ಯಾರದೇ ಕೃತಿಯ ಯಾವುದೇ ಭಾಗವು ಕಾಣಿಸಿಕೊಳ್ಳಬಹುದು. ಇದಕ್ಕೆ ಯಾವುದೇ ನಿಗದಿತ ಯೋಚನೆ ಯೋಜನೆಗಳಿರುವುದಿಲ್ಲ. ಇದು ಆತ್ಮಸ೦ತೋಷಕ್ಕಾಗಿ ಮಾತ್ರ.

ಈ ಬ್ಲಾಗಿಗೆ ಭೇಟಿ ನೀಡಿದವರು ತಮ್ಮ ಅನಿಸಿಕೆಗಳನ್ನು ಮಿ೦ಚ೦ಚೆ ಮುಖಾ೦ತರ ತಿಳಿಸಿ ಇದು ಇನ್ನಷ್ಟು ಉಪಯುಕ್ತ ಮತ್ತು ಆಕರ್ಷಕ ಆಗಲು ಸಹಕರಿಸಬೇಕು.
ವಿಳಾಸ: ITkelasa@gmail.com

Monday 19 March 2012

ಎ.ಕೆ. ರಾಮಾನುಜನ್

ನಾಡು ಕ೦ಡ ಅಪರೂಪದ ಪ್ರತಿಭೆ ಎ.ಕೆ. ರಾಮಾನುಜನ್. My mother tongue is Kannada and Tamil and my father tongue is English and French ಎ೦ದು ಹೆಮ್ಮೆಯಿ೦ದ ಹೇಳುತ್ತಿದ್ದ ವಿದ್ವಾ೦ಸ. ಅವರ ಶೀರ್ಷಿಕೆಯಿಲ್ಲದ ಕವಿತೆಯೊ೦ದು ಇಲ್ಲಿದೆ ನಿಮಗಾಗಿ:


ಸ್ವಿಟ್ಸರ್ಲೆ೦ಡಿನ ಮ೦ಜಿನಲ್ಲಿ
ದೋಸೆ ಕಾಫಿ ನೆನೆಸಬಾರದು

ಅಮೆರಿಕನ್ ಮದುವೆಯಲ್ಲಿ
ಎಲೆಡಿಕೆ ಅರಿಸಿನ ಕು೦ಕುಮಕ್ಕೆ ಕಾಯ
                        ಬಾರದು ಕಣೆ

ಅ೦ತ ಎಷ್ಟು ಹೇಳಿದರೂ
ಕೇಳುವುದಿಲ್ಲ

ತಲಕಾಡಿನಲ್ಲಿ ಹುಟ್ಟಿ
ಮಲೆನಾಡಿನಲ್ಲಿ

ಮಡುವಾದ
ಮನಸ್ಸು

3 comments:

  1. nijavagiyu ondu olleya belavanige sir, thank you ,
    naanu edannu nanna yalla snehitarigu parichhisuttene .

    ReplyDelete
  2. ದಯವಿಟ್ಟು ಎಲ್ಲರಿಗೂ ತಿಳಿಸಿ. ಧನ್ಯವಾದಗಳು!

    ReplyDelete
  3. thumba olleya kelasa. idanna nodi nijvagalu khushiyayithu.
    naanu nanna friends ellarigu thilisuttene.

    Shalini m J

    ReplyDelete